MAIN PAGE

Currently You are in a sub page . Please visit the MAIN PAGE to see more details

Saturday, December 11, 2010

Jeevan's - MY SMALL ARTICLE

ಅದು ಸಚಿನ್ ಬ್ಯಾಟಿಂಗ್ , ಅವನು ಒಂದೇ ಸಮನೆ ಬೌಂಡ್ರೀ ಮತ್ತ್ತು ಸಿಕ್ಸರ್ ಹೊಡೆಯುತ್ತಿದ್ದಾನೆ ವೀಕ್ಷಕರ ಗ್ಯಾಲರಿಯಲ್ಲಿ ಒಬ್ಬ " ನಾನು ಸತ್ತ ನಂತರ ದೇವರನ್ನು ನೋಡುತ್ತೇನೆ ಅಲ್ಲಿಯವರೆಗೂ ಸಚಿನ್ನ ಬ್ಯಾಟಿಂಗ್ ನೋಡುತ್ತೇನೆ ಎಂಬ ಭಿತ್ತ್ತಿ ಪತ್ರ ಹಿದಿದಿದ್ದನೆ.ಅದು ೫೦ ಓವರ್ಗಳ ಪಂದ್ಯ ಅವನು ಔಟ್ ಆಗದಿದ್ದರೂ ಅವನ ಬ್ಯಾಟಿಂಗ್ ವೈಭವ ೫೦ ಓವೇರ್ಗಳ ನಂತರ ಮುಗಿಯುತ್ತದೆ.ಅದು ಸುಂದರ ಪ್ರೇಮ ಕಾವ್ಯ ನನ್ನ ಜೀವನವನ್ನೇ , ನನ್ನ ಪ್ರೇಮ ನಿವೇದನೆಯನ್ನೇ ಹೇಳುತ್ತಿದ್ದಾನೆ ಏನೋ ಎನ್ನಿಸುವಷ್ಟು ಆತ್ಮೀಯವಾದ ಭಾವ ಅದಕ್ಕೆ ಹೊಂದಿದ ಕಂಠ ,ಅರಿಯದೆ ಬರುವ ಕಣ್ಣೇರಿನಂತ ಸಂಗೀತ ಆದರೂ ೫ ನಿಮಿಷಕ್ಕೆ ಮುಗಿದು ಹೋಗುತ್ತದೆ ಹೆಚ್ಚೆಂದರೆ ೭ ನಿಮಿಷ. ಸಂಗಾತಿಯೊಂದಿಗೆ ನಡೆದು ಹೋಗುತ್ತಿರುವಾಗ ಅಚಾನಕ್ ಆಗಿ ಸುರಿವ ಮಳೆ ರಸ್ತೆಯಲ್ಲಿ ಯಾರೂ ಇಲ್ಲ ಕೈಗಳು ಹತ್ತಿರ ಬಂದವು ಮರದ ಗಾಳಿ ಮೆಲ್ಲನೆ ಅವರನ್ನು ಮುಂದಕ್ಕೆ ತಳ್ಳುತ್ತಿದೆ ಅವನ ಮನಸಲ್ಲಿ ಈ ಮಳೆ ಹೀಗೆಯೇ ಇರಬಾರದ ಎಂದುಕೊಳ್ಳುವಗಲೆ ಮಳೆ ನಿಲ್ಲುತ್ತದೆ,ಅದು ಸಾವನ್ನೇ ಕೊಲ್ಲುವಷ್ಟು ಕೃರವಾದ ಯುದ್ದ ಬದುಕನ್ನು ಎಲ್ಲವುಗಳಿಗಿಂತ ಬೇಗವಾಗಿ ಮುಗಿಸುತ್ತಿದ್ದವು ಸೋಲನ್ನೊಪ್ಪಿಕೊಂಡ ನಂತರ ಯುದ್ದ ನಿನ್ತಿತು.ಅದು ಕೂಡ ಎಲ್ಲ ಸತ್ಯಗಳಷ್ಟೇ ಕಠೋರವಾದದ್ದು ಅದೇ "ಅಂತ್ಯ",ಅದು ಎಷ್ಟು ಕ್ರುಉರವೊ ಅಷ್ಟೇ ಸತ್ಯ. ಎಲ್ಲ ಸತ್ಯ ,ಅಸತ್ಯ , ಸುಂದರ,ವಿಸ್ಮಯ,ಆತ್ಮೀಯ ಸಂಗತಿಗಳಿಗೂ ಕೊನೇ ಇದೆ.ಸೊಲನ್ನುಒಪ್ಪಿಕೊಂಡಷ್ಟೇ ನಿಕೃಷ್ಟವಾಗಿ ನಾವು ಸಾವನ್ನು ಸಹ ಒಪ್ಪಿಕೊಳ್ಳಲೇ ಬೇಕು

ಒಬ್ಬ ವ್ಯಕ್ತಿಯ ಆಸೆ ಕನಸುಗಳನ್ನು ಮುಗಿಸುವ ತಾಕತ್ತು ಒಂದು ಪ್ರೀತಿಗೆ, ಒಂದು ಹುಡುಗಿಗೆ,ಒಂದು ಸಮಾಜಕ್ಕೆ,ಒಂದು ಸರ್ಕಾರಕ್ಕೆ,ಒಂದು ಅವಮಾನಕ್ಕೆ,ಒಂದು ಸೋಲಿಗೆ .ಒಂದು ಅಂಗವಿಕಲತೆಗೆ,ಒಂದು ಬಡತನಕ್ಕೆ ಯಾವುದಕ್ಕೂ ಇಲ್ಲ .ಸಾವನ್ನು ಹೊರತಾಗಿ ಬದುಕಿನ ಆಸೆ ಕನಸುಗಳನ್ನು ಮುಗಿಸುವ ತಾಕತ್ತು ಯಾವುದಕ್ಕೂ ಇಲ್ಲ,ಯಾರಿಗೂ ಇಲ್ಲ ಅದು ಬಂದಾಗ ಅಷ್ಟೇ ಆತ್ಮೀಯವಾಗಿ ಒಪ್ಪಿಕೊಳ್ಳಬೇಕು ಅಂತ್ಯವಿಲ್ಲದ್ದು ಯಾವುದು ಇಲ್ಲ ಸಾವಿನಷ್ಟು ಪರಿಪೂರ್ಣವಾದದ್ದು ಈ
ಜಗತ್ತಿನಲ್ಲಿ ಯಾವುದು ಇಲ್ಲ.

ಗಾಂಧೀಜಿ ಅಸ್ಥಂಗತರಾಗಿ ದಶಕಗಲೆ ಗತಿಸಿವೆ, ರಾಜ್ ಕುಮಾರ್ ರವರನ್ನು ಕಳೆದುಕೊಂಡು ವರ್ಷಗಳೇ ಗತಿಸಿದವು,ಇತ್ತೀಚೆಗೆ ಜ್ಯೋತಿ ಬಸು , ವಿಷ್ಣುವರ್ಧನ್ ಹಾಗೂ ಇಬ್ಬರು ಅಶ್ವಥ್ರಾನ್ನು ಕಳೆದುಕೊಂಡೆವು ಅವರವರಾರು ಕೆಲಸಗಳು ಮುಗಿದವು ಅವರು ಹೊರಟರು(ಕೆಲಸ ಮುಗಿಯದಿದ್ದರು ಹೋಗಲೇಬೇಕು).ಅವರ ಸಾಧನೆಗಳನ್ನು ಕೊಂಡಾಡಿದರು ಪೇಪರ್ ನಲ್ಲಿ ಪುಟಗಟ್ಟಲೆ ,ದೂರದರ್ಶನದಲ್ಲಿ ದಿನಪೊರ್ತ ಅವರ ಸಾಧನೆಗಳು ,ನಡೆದು ಬಂದ ಹಾದಿ,ಅನುಭವಿಸಿದ ಯಾತಣೆಗಳ ದರ್ಶನವಾಯ್ತು,ಯಾರೇ ಆಗಲಿ ಕಲಾವಿದ,ವಿಜ್ಞಾನಿ,ರಾಜಕಾರಣಿ,ಸಮಾಜವಾದಿ,ಯಾವೋನೆ ಆದರ್ಶ ವ್ಯಕ್ತಿ ಸತ್ತರು ಅವರ ಶತ್ರುಗಳು ಕೂಡ ಅವರನ್ನು ಮೆಚ್ಚಿ ಮಾತನಾಡುತ್ತಾರೆ ಅವರಂತೆ ನಡೆಯಬೇಕು,ಒಂದು ಚೇತನ / ಮಾರ್ಗದರ್ಶಕ ಎಲ್ಲವಾಗಿದೆ ಎಂಬಂತಾ ಮಾತುಗಳು ಹರಿದಾಡುತ್ತವೆ ಮತ್ತು ಅದು ಸಹಜ ಕೂಡ .ಆದರೆ ನಾನು ಹೇಳ ಹೊರಟಿರುವುದು ಅವರು ಬದುಕಿದ್ದಾಗ ನಾವು ಅವರಿಗೆ ತೋರಿಸಿದ ಗೌರವ ,ಅವರ ಆದರ್ಶಗಳ ಪಾಲನೆಗಳ ಬಗ್ಗೆ .ಬದುಕಿದ್ದಾಗ ಅವರ ಆಸ್ಪತ್ರೆಗಳ ಖರ್ಚಿಗೆ ಹಣವಿಲ್ಲದೇ ಒದ್ದಾಡಿ ಕಂಡ ಕಂಡಲ್ಲಿ ಸಾಲ ಮಾಡಿ ಅವರನ್ನು ಬದುಕಿಸೃತ್ತಾರೆ ,ಅವರ ಸಂಶೋಧನೆಗಳಿಗೆ ಬೆಲೆ ಕೊಡದೇ ಸತ್ತ ನಂತರ ಪಡುವ ಪಾಶಾಚತಾಪಕ್ಕೆ ಯಾವುದೇ ಅರ್ಥ ಇರುವುದಿಲ್ಲ ಆಗಬೇಕಾಗಿರುವುದೊಂದೇ ಅವರು ಬದುಕಿದ್ದಾಗ ಸಮಾಜಕ್ಕೆ ಅವರ ಕೊಡುಗೆ ಹಾಗೂ ಅವರ ಅವಶಯಕತೆಯನ್ನು ತಿಳಿಸಿದರೆ ಅವರ ಬಗ್ಗೆ ಎರಡು ಒಳ್ಳೇ ಮಾತುಗಳನ್ನಾಡಿದರೆ ಅದುವೇ ಅವರಿಗೆ ದೊರೆಯಬಹುದಾದ ಬಹು ದೊಡ್ಡ ಗೌರವ.


ಈಗ ಆಗಬೇಕಾಗಿರುವುದಿಷ್ಟೇ ನಮ್ಮ ಕರ್ನಾಟಕದಲ್ಲಿ ವಿವಿಧ ಕ್ಸೆತ್ರಗಳಲ್ಲಿ ಸೇವೆ ಸಲ್ಲಿಸಿದ ಬಹಳಷ್ಟು ಜನರಿದ್ದಾರೆ ಅವರಾರು ಇಂದು ಯಾರಿಗೂ ಕಾಣುತ್ತಿಲ್ಲ ಕಾಣುವುದು ಇಲ್ಲ, ಅವರ ಸಂಪೂರ್ಣ ಪರಿಚಯವಾಗುವುದು ಅವರು ನಮ್ಮನ್ನಗಲಿದಾಗಲೆ ಅದರ ಬದಲು ಈಗಲೇ ಆಯಾ ಕ್ಷೇತ್ರದ ಹಿರಿಯರನ್ನು ಗುರುತಿಸಿ ಅವರು ನಡೆದು ಬಂದ ಹಾದಿಯ ಬಗ್ಗೆ ಅವರು ಅನುಭವಿಸಿದ ಕಷ್ಟಗಳು,ಕಂಡುಕೊಂಡ ದಾರಿಗಳು ಅವರ ಮುುಲಕವೇ ತಿಳಿದುಕೊಂಡರೆ ಅದಕ್ಕಿಂತ ಮಹತ್ತರವಾದದ್ದು ಯಾವುದುಇರುವುದಿಲ್ಲ ಅವರ ಬಗ್ಗೆ ಯಾರ್ಯರಿಗೆ ಯಾವ ಯಾವ ಅಭಿಪ್ರಾಯಗಳಿರುತ್ತವೆಯೋ / ಭಿನ್ನಾಭಿಪ್ರಾಯಗಲಗಲಿ ಈಗಲೇ ವ್ಯಕ್ತವಾಗಬೇಕು ಅವರಿಗೆ ತಮ್ಮ ಬಗ್ಗೆ ಸಮಾಜಕ್ಕಿರುವ ಕಾಳಜಿ ತಿಳಿಯಬೇಕು.

ಸತ್ತ ನಂತರ ಅಮೃತ ಶಿಲೆಯಲ್ಲಿ ಕಟ್ಟುವ ಸಮಾಧಿಗಿಂತ ಬದುಕಿದ್ದಾಗ ಕಟ್ಟಿಕೊಡುವ ಹೆಂಚಿನ ಮನೆಯೇ ಲೇಸ

No comments: